ಮೂವತ್ತೈದು ವರ್ಷಗಳಿಂದ ಕೈಗಾ ಸ್ವಾಧೀನ ದಲ್ಲಿರುವ ಜಮೀನಿಗೆ ಕೂಡಲೇ ಪರಿಹಾರ ನೀಡುವಂತೆ ಶಾಸಕ ಸತೀಶ ಸೈಲ್ ಒತ್ತಾಯಿಸಿದ್ದಾರೆ.

NPCIL  ಕೈಗಾ ಇವರ ಕಾಂಪೌಂಡ್ ಒಳಗಿರುವ ವಿರ್ಜೆ ಗ್ರಾಮದ ರೈತರ ಜಮೀನಿಗೆ ಕೂಡಲೇ ಪರಿಹಾರ ನೀಡಲು ಶಾಸಕ ಸತೀಶ ಕೃಷ್ಣಾ ಸೈಲ್ NPCIL ಕೈಗಾ ಸ್ಟೇಷನ್ ಡೈರೆಕ್ಟರ್ ಇವರಿಗೆ ಪತ್ರ ಮೂಲಕ ಒತ್ತಾಯಿಸಿದ್ದಾರೆ.

ವಿರ್ಜೆ ಗ್ರಾಮದ ನಾಲ್ಕು ರೈತಾಪಿ ಕುಟುಂಬದ ಸುಮಾರು ಎರಡು ಎಕರೆ ಜಮೀನು ಪರಿಹಾರ ನೀಡದೆ ಕೈಗಾ ಆಡಳಿತದ ಅಧೀನದಲ್ಲಿ ಇರಿಸಿದೆ..ಈ ಜಮೀನು NPCIL ಇವರ ಕಾಂಪೌಂಡ್ ಒಳಗಿದ್ದು ,ಈ ಜಮೀನಿನ ಮಾಲಕತ್ವ ರೈತರ ಹೆಸರಿನಲ್ಲಿದೆ. ಈಗಲೂ ಕೂಡ ರೈತರೇ ಪಂಚಾಯಿತಿ ಕರ ತುಂಬುತಿದ್ದಾರೆ. ಈ ರೈತರಿಗೆ ತಮ್ಮ ಜಮೀನಿನಲ್ಲಿ ರೈತಾಪಿ ಕೆಲಸ ನಡೆಸಲು ಕೈಗಾ ಕಾಂಪೌಂಡ್ ಗೋಡೆ ಯಿಂದಾಗಿ ದಾರಿ ಇಲ್ಲದಂತಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಈ ವಿಷಯ ಶಾಸಕ ಸತೀಶ ಸೈಲ್ ಗಮನಕ್ಕೆ ಬಂದಿದ್ದು ,ಇದನ್ನು ಅವರು ಕೈಗಾ ಆಡಳಿತದ ಗಮನಕ್ಕೆ ತಂದಿದ್ದು ರೈತರಿಗೆ ನ್ಯಾಯ ದೊರಕಿಸಲು ಒತ್ತಾಯ ಮಾಡಿದ್ದರು.ಆದರೂ ಇಲ್ಲಿಯವರೆಗೂ ರೈತರಿಗೆ ನ್ಯಾಯ ದೊರಕಿಲ್ಲ.ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆದಿದ್ದ ಶಾಸಕರು,ಜಿಲ್ಲಾಧಿಕಾರಿಗಳ ಮುಖಾಂತರ ಸಮಸ್ಯೆ ಯನ್ನು ಕೈಗಾ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

 ಇದೀಗ NPCIL ಕೈಗಾ ಇವರಿಗೆ ಪತ್ರ ಬರೆದಿದ್ದ ಶಾಸಕರು,ಕೂಡಲೇ ಪ್ರಸ್ತುತ ಜಾರಿಯಲ್ಲಿರುವ ಕಾಯಿದೆ ಪ್ರಕಾರ ರೈತರಿಗೆ ಭೂ ಪರಿಹಾರ ನೀಡ ಬೇಕು,ಅಥವಾ ರೈತರಿಗೆ ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ದಾರಿ ಮಾಡಿಕೊಟ್ಟು ಸಹಕರಿಸಬೇಕೆಂದು ಆಡಳಿತ ವರ್ಗಕ್ಕೆ ತಾಕೀತು ಮಾಡಿದ್ದಾರೆ.

NPCIL ಕೈಗಾ ಇವರು ಜಿಲ್ಲಾಧಿಕಾರಿ ಮಧ್ಯಸ್ಥಿಕೆ ಯಲ್ಲಿ ಶೀಘ್ರ ದಲ್ಲಿ ಈ ಸಮಸ್ಯೆ ಬಗೆಹರಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಪತ್ರಿಕಾ ಪ್ರಕಟಣೆ ಯಲ್ಲಿ ಶಾಸಕ ಸತೀಶ ಕೆ ಸೈಲ್ ಆಗ್ರಹಿಸಿದ್ದಾರೆ.