Two youths arrested for consuming ganja in Murudeshwar| ಮುರುಡೇಶ್ವರ: ಇತ್ತಿಚೀನ ದಿನಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಮಾದಕ ಪದಾರ್ಥ ಸೇವನೆ ಹಾಗೂ ಕಾನೂನು ಬಾಹೀರ ಚಟುವಟಿಕೆಗಳು ಹೆಚ್ಚುತ್ತಿದ್ದು, ಇದು ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗುತ್ತಿದೆ. ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿರುವ ಮುರುಡೇಶ್ವರದಲ್ಲಿ ಮಾದಕ ಪದಾರ್ಥ ಸೇವನೆಯ ಪ್ರಕರಣ ಹೆಚ್ಚುತ್ತಿದ್ದು, ಗಾಂಜಾ ಸೇವನೆ ಆರೋಪದ ಬೆಂಗಳೂರಿನ ಇಬ್ಬರು ಯುವಕರನ್ನು ಪೋಲಿಸರು ಮುರುಡೇಶ್ವರದಲ್ಲಿ ಬಂಧಿಸಿದ್ದಾರೆ.
ಬೆಂಗಳೂರಿನ ಸತೀಶ ಸೆಲ್ವರಾಜ್ (21) ಹಾಗೂ ಮೋನಿಶ್ ಬಾಬು ತಂದೆ ಭಾಸ್ಕರ ರೆಡ್ಡಿ (18) ಇಬ್ಬರು ಬಂಧಿತ ವಿದ್ಯಾರ್ಥಿಗಳು. ಇವರಿಬ್ಬರೂ ಮುರುಡೇಶ್ವರ ದೇವಸ್ಥಾನದ ಹತ್ತಿರದ ಬೀಚ್ನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾದಕ ವಸ್ತುವನ್ನು ಸೇವನೆ ಮಾಡಿದ ಅನುಮಾನದ ಮೇಲೆ ಪೋಲಿಸರು ವಿಚಾರಣೆ ನಡೆಸಿದ್ದಾರೆ.
ಪೋಲಿಸರ ವಿಚಾರಣೆಯಲ್ಲಿ ಯುವಕರು ಸತ್ಯ ಬಾಯ್ಬಿಟ್ಟಿದ್ದಾರೆ. ಇದನ್ನು ದೃಢಿಪಡಿಸಲು ಭಟ್ಕಳ ತಾಲೂಕಾ ಆಸ್ಪತ್ರೆಯಲ್ಲಿ ಗಾಂಜಾ ಸೇವನೆಯ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ವೈದ್ಯಕೀಯ ವರದಿಯಲ್ಲಿ ಯುವಕರಿಬ್ಬರೂ ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿದೆ.
ಪೋಲಿಸರು ಯುವಕರಿಬ್ಬರ ಮೇಲೂ ಎನ್.ಡಿ.ಪಿ.ಎಸ್ ಆಕ್ಟ್ ( NDPS Act) ಅಡಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
